ಮರಣಾನಂತರದ ಜೀವನ: ಒಂದು ತರ್ಕಬದ್ಧ ಅವಲೋಕನ
ಮರಣಾನಂತರದ ಜೀವನ: ಒಂದು ತರ್ಕಬದ್ಧ ಅವಲೋಕನ ಪೀಠಿಕೆ: ಪ್ರತಿಯೊಬ್ಬ ಮಾನವನಿಗೂ ಸಾವು ಕಾದಿದೆ ಎಂಬುದು ನಿಶ್ಚಿತ ಸತ್ಯ . ಆದರೆ ಸಾವಿನ ನಂತರ ಏನಾಗುತ್ತದೆ? ಮಾನವನೆಂಬ ಈ ಅದ್ಭುತ ಸೃಷ್ಟಿ ಕೇವಲ ಮಣ್ಣಾಗಿ ಹೋಗುತ್ತದೆಯೇ? ಅಥವಾ ಅವನು ಮಾಡಿದ ಒಳ್ಳೆಯ ಮತ್ತು ಕೆಟ್ಟ ಕೆಲಸಗಳಿಗೆ ಪ್ರತಿಫಲ ಸಿಗುವಂತಹ ಮತ್ತೊಂದು ಜೀವನವಿದೆಯೇ? ಎಂಬ ಪ್ರಶ್ನೆಗಳು ಕಾಡುವುದು ಸಹಜ . ನಮ್ಮ ಇಂದ್ರಿಯಗಳಿಗೆ ಈಗ ಅದು ಗೋಚರಿಸುತ್ತಿಲ್ಲ ಎಂಬ ಕಾರಣಕ್ಕೆ ಅದನ್ನು ನಿರಾಕರಿಸುವುದು ವೈಚಾರಿಕತೆಗೆ ಸಲ್ಲದು . ಜೀವನದ ಹಂತಗಳು ಮತ್ತು ಪರೀಕ್ಷೆ: ನಾವು ತಾಯಿಯ ಗರ್ಭದಲ್ಲಿ ಹತ್ತು ತಿಂಗಳು ಇದ್ದು ಈ ಲೋಕಕ್ಕೆ ಬಂದೆವು. ಗರ್ಭದ ಜೀವನ ಮುಗಿದ ನಂತರ ಈ ಪ್ರಾಪಂಚಿಕ ಜೀವನ ಪ್ರಾರಂಭವಾಯಿತು. ಅದೇ ರೀತಿ, ಈ ಜೀವನದ ನಂತರ ಕಬರ್ (ಸಮಾಧಿ) ಮತ್ತು ಅದರ ನಂತರ ಮರುಜನ್ಮದ ಹಂತಗಳಿವೆ . ಕುರ್ಆನ್ ಹೇಳುವಂತೆ ಈ ಜೀವನವು ಒಂದು ಪರೀಕ್ಷೆಯಾಗಿದೆ: "ನಿಮ್ಮಲ್ಲಿ ಯಾರು ಅತ್ಯುತ್ತಮ ಕಾರ್ಯಗಳನ್ನು ಮಾಡುತ್ತಾರೆ ಎಂದು ಪರೀಕ್ಷಿಸಲು ಅವನು ಜೀವನ ಮತ್ತು ಮರಣವನ್ನು ಸೃಷ್ಟಿಸಿದನು." (ಕುರ್ಆನ್ 67:2) ಮರುಜನ್ಮದ ತರ್ಕಬದ್ಧ ಪುರಾವೆಗಳು: ಒಂದು ಹನಿ ವೀರ್ಯದಿಂದ ಮನುಷ್ಯನನ್ನು ಸೃಷ್ಟಿಸಿದ ಸೃಷ್ಟಿಕರ್ತನಿಗೆ, ಅವನು ಮಣ್ಣಾದ ನಂತರ ಮತ್ತೆ ಜೀವ ನೀಡುವುದು ಕಷ್ಟವೇನಲ್ಲ . ಮೊದಲ ಬಾರಿ ಸೃಷ್ಟಿಸಲು ಸಾಧ್ಯವಾದವನಿಗೆ ಎರಡನೇ ಬಾರಿ ಸೃಷ್ಟಿಸುವುದು ತರ್ಕಬದ್ಧವಾಗಿ ಹೆಚ್ಚು ಸುಲಭವಾಗಿದೆ...