ಮನದ ಶಾಂತಿಗಾಗಿ ಒಂದು ಮಹತ್ತರವಾದ ಸಲಹೆ!
ಮನದ ಶಾಂತಿಗೆ ಒಂದು ಮಹತ್ತರವಾದ ಸಲಹೆ! ಆರ್ಥಿಕವಾಗಿ ತನಗಿಂತ ಶ್ರೀಮಂತನಾಗಿರುವವನನ್ನು ನೋಡಿ ಮನುಷ್ಯನು ತನ್ನನ್ನು ತಾನೇ ವೇದನೆಗೆ ಒಳಪಡಿಸಿಕೊಳ್ಳುತ್ತಾನೆ. ಅವನ ಮೇಲೆ ಅಸೂಯೆಪಟ್ಟು ನಿಟ್ಟುಸಿರು ಬಿಡುತ್ತಾನೆ. ತಮಗೆ ಬೇಕಾದ ಸೌಲಭ್ಯಗಳೊಂದಿಗೆ ಸ್ವಾವಲಂಬಿಯಾಗಿ ಬದುಕುತ್ತಿರುವ ಕುಟುಂಬಗಳಾದರೂ, ನೆರೆಹೊರೆಯವರ ಸೌಲಭ್ಯಗಳನ್ನು ನೋಡಿ "ಅವು ನಮ್ಮಲ್ಲಿ ಇಲ್ಲವಲ್ಲ" ಎಂದು ಹಂಬಲಿಸುತ್ತಾರೆ. ಆ ಹಂಬಲವು ಕಾಲಾನಂತರದಲ್ಲಿ ಪತಿಯನ್ನು ಪೀಡಿಸುವುದಕ್ಕೂ, ಜಗಳವಾಡುವುದಕ್ಕೂ ಮತ್ತು ಕುಟುಂಬ ಕಲಹಗಳಿಗೂ ಕಾರಣವಾಗುತ್ತದೆ. ಇದು ಪ್ರಾಮಾಣಿಕರನ್ನು ಕೂಡ ಲಂಚದಂತಹ ಪಾಪಗಳಲ್ಲಿ ತೊಡಗುವಂತೆ ಮಾಡುತ್ತದೆ. ಒಬ್ಬ ದೇಶವನ್ನಾಳುವ ರಾಜನು ತನ್ನ ದೇಶಕ್ಕಿಂತ ಆರ್ಥಿಕವಾಗಿ ಸಮೃದ್ಧವಾಗಿರುವ ದೇಶವನ್ನು ನೋಡಿ ಅಸೂಯೆ ಪಡುತ್ತಾನೆ. ಇದರ ಅಂತಿಮ ಹಂತವು ಯುದ್ಧದಲ್ಲಿ ಕೊನೆಗೊಳ್ಳುತ್ತದೆ. ಲಕ್ಷಾಂತರ ಜೀವಗಳು ಬಲಿಯಾಗುತ್ತವೆ. ಇದೇ ರೀತಿ ದೈಹಿಕ ರೂಪದಲ್ಲಿ ಒಬ್ಬನು ತನಗಿಂತ ಸುಂದರವಾದವರನ್ನು ಕಂಡಾಗ ಅವರ ಮೇಲೆ ಅಸೂಯೆ ಪಡುತ್ತಾನೆ. ಆ ಸೌಂದರ್ಯದ ಕಾರಣದಿಂದ ಅವರಿಗೆ ಸಿಗುವ ವಿಶೇಷತೆಗಳನ್ನು ನೋಡಿದಾಗ, ಇದು ಇನ್ನೂ ಹೆಚ್ಚಾಗಿ ಇವನ ಮನಸ್ಸಿನಲ್ಲಿ ಕೀಳರಿಮೆಯನ್ನು ಉಂಟುಮಾಡುತ್ತದೆ. ಒಂದು ಕಣ್ಣನ್ನು ಕಳೆದುಕೊಂಡವರು ಎರಡು ಕಣ್ಣುಗಳಿರುವವರೊಂದಿಗೆ ತನ್ನನ್ನು ಹೋಲಿಕೆ ಮಾಡಿಕೊಳ್ಳುವುದರಿಂದ ತನಗೆ ಅನ್ಯಾಯವಾಗಿದೆ ಎಂದು ಭಾವಿಸಿ ದುಃಖಿಸುತ್ತಾರೆ. ಹೀಗೆ ಜಗ...